ಅಪಘಾತ

ಸ್ವಾಮಿ, ಇದೆ ಕಡೆಗೀಟು;
ತಲೆತಲಾಂತರದಿಂದ
ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ
ಎಂಥ ಘನ ಬಾದರಾಯಣ ದೈತ್ಯಬಂಧವೂ
ದಾಟಬಾರದ ಕಟ್ಟಕಡೆಗಟ್ಟು ಇದರೀಚೆ
ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ
ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ;
ಭಂಡತನದಲಿ ಹಾಗೆ ದಬ್ಬಿದಿರೊ, ಸಿಹಿಮೊಲ್ಲೆ
ಮಾತು ಮೊಸರನ್ನದಲಿ ಕಲ್ಲಾಗಿ ಹವೆ ತುಂಬ
ಸಿಡಿಯುವುದು ಮದ್ದು ಲಾಟೀಪೆಟ್ಬು ಕಲ್ಲೇಟು.
ಸುತ್ತ ನಡೆಸಿರಿ
ಹಂಡೆ ಕಳ್ಳು ಹೇರಿದ ನಿಮ್ಮ ದೆವ್ವಲಾರಿಯ
ಇದ್ದರದಕೆ ತೆಗೆದೇ ಬ್ರೇಕ,
ಧಮ್ಮಸ್ಸಿನಲಿ ಕುಟ್ಟಿ ಜಡಿದ ಸೆಟೆಗಲ್ಲುಗಳು
ಕಿತ್ತೆದ್ದು ಸಿಡಿದು ಮುಖಕೇ ಬೀಸಿ ಬಡಿವನಕ,

ಸರ್ಕಲ್ಲ ಸುತ್ತ ಬಿದ್ದಿದೆ ಹರಿದಮೈ-ರಸ್ತೆ;
ನಡುವೆ ಇಷ್ಟಗಲ ಹಾಯಾಗಿ ಸಿರಿಮೈಯೆತ್ತಿ
ತೂಗುತಿದೆ ಹಸಿರು. ಸ್ವಾಮೀ ನಿಮ್ಮ ಮೋಟಾರು
ಹತ್ತದಿರಲಷ್ಟೆ ಸರ್ಕಲ್ಲಿನಂಚ! ಹತ್ತಿತೋ
ಹುಲ್ಲೆ ಸತ್ತೀತು, ಇಲ್ಲವೆ ಕಲ್ಲ ತಡೆ ಬಡಿದು
ಲಾರಿ ಉರುಳೀತು, ಮದ್ಯದ ಡೊಳ್ಳು ಪಾಲಾಗಿ
ಕೆಟ್ಟ ಜನ ಹುಯ್ಲ ಎಬ್ಬಿಸಿ ಕೇಕೆ ಹಾಕುತ್ತ
ರಕ್ತದಂಥಾ ಮದ್ಯ ಮಣ್ಣಿನಲಿ ಇಂಗೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂದೇವಿ
Next post ಲಾಲಿಽಽಽ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys